Welcome to Bharathi college.   PG Admission Open.     Applications available in College Office.
About Kannada Department
ಭಾರತೀ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ನಮ್ಮಗುರಿ
ಬೋಧನೆ-ಶೋಧನೆ-ಪ್ರಕಟಣೆ
  • ಭಾರತೀ ಕಾಲೇಜು 1970-71 ರಲ್ಲಿ ಪ್ರಾರಂಭವಾಯಿತು. ಕನ್ನಡ ಸ್ನಾತಕೋತ್ತರ ವಿಭಾಗವು 2011-12 ರಲ್ಲಿ ಪ್ರಾರಂಭವಾಯಿತು.
  • ಇದು ಮೈಸೂರು ವಿಶ್ವವಿದ್ಯಾನಿಲಯದ ಅನುಮೋದನೆಗೆ ಒಳಪಟ್ಟಿರುತ್ತದೆ.
  • ಕನ್ನಡ ಎಂ.ಎ. ತರಗತಿಗೆ ಪ್ರವೇಶ ಪಡೆಯಲು 30 ವಿದ್ಯಾರ್ಥಿಗಳಿಗೆ ಅವಕಾಶವಿದೆ.
  • ಕನ್ನಡ ಎಂ.ಎ ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯ ನಿಗದಿಪಡಿಸಿರುವ ಪಠ್ಯ ವಿಷಯಗಳನ್ನು ಅಧ್ಯಯನ ಮಾಡಬೇಕು.
  • ಕನ್ನಡ ಎಂ.ಎ ನಾಲ್ಕು ಸೆಮಿಸ್ಟರ್‍ಗಳಿಂದ ಕೂಡಿದೆ, ಎರಡು ವರ್ಷದ ಕೋರ್ಸ್ ಆಗಿರುತ್ತದೆ.
ಪ್ರವೇಶ ಪಡೆಯಲು ಅರ್ಹತೆಗಳು:
  • ಬಿ.ಎ. ತರಗತಿಯಲ್ಲಿ ಕನ್ನಡ ಐಚ್ಛಿಕ ವಿಷಯವನ್ನು ಮೇಜರ್ ಆಗಿ ತೆಗೆದುಕೊಂಡು ಅಧ್ಯಯನ ಮಾಡಿರುವ ಪದವಿ ಪಾಸಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
  • ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ನಡೆಸುವ ‘ಪ್ರವೇಶ ಪರೀಕ್ಷೆ’ಯನ್ನು ಬರೆದಿರಬೇಕು.
ನಮ್ಮಲ್ಲಿರುವ ಸೌಲಭ್ಯಗಳು:
  • ಕನ್ನಡ ವಿಭಾಗದಲ್ಲಿ ಒಟ್ಟು 09 ಅನುಭವಿ ಅಧ್ಯಾಪಕರಿದ್ದಾರೆ.
  • ಇವರಲ್ಲಿ ನಾಲ್ವರು ಪಿಎಚ್.ಡಿ ಪದವಿ ಪಡೆದವರಾಗಿದ್ದು ಎಂ.ಫಿಲ್ ಪದವಿ ಮತು ಎನ್‍ಇಟಿ ಪರೀಕ್ಷೆಯ್ಲಲೂ ತೇರ್ಗಡೆಯಾದವರಿದ್ದಾರೆ.
  • ಅತ್ಯುತ್ತಮವಾದ ಗ್ರಂಥಾಲಯ ಸೌಲಭ್ಯವಿದೆ. ವಿಶಾಲವಾದ ಪರಾಮರ್ಶನ ವಿಭಾಗವಿದೆ.
  • ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳು ಹಾಗೂ ಅಧ್ಯಯನಕ್ಕೆ ಪೂರಕವಾದ ಶೈಕ್ಷಣಿಕ ವಾತಾವರಣವಿದೆ.
  • ಪಿ.ಪಿ.ಟಿ. ಮೂಲಕವೂ ಬೋಧನೆ ಇದೆ.
  • ತಿಂಗಳಿಗೊಂದು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
  • ಕೆ-ಸೆಟ್ ಮತ್ತು ಎನ್‍ಇಟಿ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.
  • ಯುಜಿಸಿ ಮತ್ತು ಸರ್ಕಾರದ ವಿವಿಧ ಆಕಾಡೆಮಿ, ಪ್ರಾಧಿಕಾರಗಳ ಸಹಯೋಗದಲ್ಲಿ ವಿಚಾರಗೋಷ್ಠಿ/ ಕಮ್ಮಟಗಳ ಆಯೋಜನೆ.
  • ಕವಿ ಸಾಹಿತಿಗಳೊಡನೆ ಸಂವಾದ ಮತ್ತು ಸಾಹಿತಿಗಳ ಜನ್ಮಸ್ಥಳ, ಮನೆ, ಜಾನಪದ ವಸ್ತುಸಂಗ್ರಹಾಲಯ ಮೊದಲಾದವುಗಳಿಗೆ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ.
ಸಂಶೋಧನಾ ಕೇಂದ್ರ
  • ಮೈಸೂರು ವಿಶ್ವವಿದ್ಯಾನಿಲಯದ ಖಾಸಗಿ ಕಾಲೇಜುಗಳಲ್ಲಿ ಮೊದಲ ಬಾರಿಗೆ ಕನ್ನಡ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಿದ ಹೆಗ್ಗಳಿಕೆ ನಮ್ಮದು.
  • 2014-15 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಸಂಶೋಧನಾ ಕೇಂದ್ರ ತೆರೆಯಲು ಅನುಮತಿ ನೀಡಿರುತ್ತದೆ.
  • ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಮೂವರು ಅಧ್ಯಾಪಕರುಗಳಿಗೆ ವಿಶ್ವವಿದ್ಯಾನಿಲಯ ಅನುಮತಿ ನೀಡಿದೆ.
  • ಭಾರತೀ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಒಟ್ಟು 18 ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ.
  • ಕನ್ನಡ ಸಂಶೋಧನಾ ಕೇಂದ್ರದ ವತಿಯಿಂದ ‘ಶೋಧಭಾರತಿ’ ಎಂಬ (ISSಓ 2349-8935) ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದೆ.
ಫಲಿತಾಂಶ :
  • ಇದುವರೆಗಿನ ಎಲ್ಲಾ ಪರೀಕ್ಷೆಗಳಲ್ಲಿ ಶೇ.100% ಫಲಿತಾಂಶ ಬಂದಿರುತ್ತದೆ.
  • 2012-13 ನೇ ಸಾಲಿನಲ್ಲಿ ಬಿ. ರಾಜೇಂದ್ರ ಪ್ರಸಾದ್ ಅವರು ಮೂರು ಚಿನ್ನದ ಪದಕಗಳನ್ನು ಪಡೆದಿರುತ್ತಾರೆ.
  • 2013-14 ನೇ ಸಾಲಿನಲ್ಲಿ ಎಸ್. ಹರೀಶ್‍ಕುಮಾರ್ ಅವರು 2ನೇ ರ್ಯಾಂಕ್ ಮತ್ತು ಮೂರು ಚಿನ್ನದ ಪದಕ ಪಡೆದಿರುತ್ತಾರೆ.
  • 2014-15 ನೇ ಸಾಲಿನಲ್ಲಿ ಅಂತಿಮ ಎಂ.ಎ ತರಗತಿಯಲ್ಲಿದ್ದಾಗಲೆ ತಾರಾದೇವಿ ಮತ್ತು ಪ್ರತಾಪ್ ಡಿ.ಸಿ ಇವರು ಕೆ-ಸೆಟ್ ಮತ್ತು ಎನ್‍ಇಟಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.